Friday, August 31, 2018

ಅನಿಸಿಕೆ

ನನ್ನ ಸುಂದರ ಕೊಡಗು ವಿರುಪಗೊಂಡಿತ್ತು, ಪ್ರಕೃತಿ ಮುನಿಸಿಕೊಂಡು ಹಾಲಹಲಗೊಂಡಿತು, ಜನ ಪರಿತಪಿಸುತಿದ್ದರು ದಾರಿ ಕಾಣದಗಿದ್ದರು, ಆಗಲೇ ತಿಳಿದಿದ್ದು ಕೊಡಗಿನ ತಾಕತ್ತು, ಒಗ್ಗಟು. ಸಂಘಪರಿವಾರಗಳು, ಯುವಕರು, ಸ್ನೇಹಿತರು ,ಸ್ವಯಂಸೇವಕರು ಹೀಗೆ ಅನೇಕರು ಜೀವದ ಹಂಗು ತೊರೆದು ಸಹಾಯಕ್ಕೆ ದಾವಿಸಿಬಿಟ್ಟರು ನೀರು ಆಹಾರ ಇಲ್ಲದೆ ಹಗಲು ರಾತ್ರಿ  ಲೆಕ್ಕಿಸದೇ ಧರ್ಮ ಭೇದ ವಿಲ್ಲದೆ  ರಕ್ಷಣೆಗೆ ಧಾವಿಸಿದರು ಅದರಲ್ಲಿ ಯಾವ ಸ್ವಾರ್ಥವು ಇರಲಿಲ್ಲ (ಬೆರಳೆಣಿಕೆಯ ಪಾಪಿಗಳು ತಮ್ಮ ಬೇಳೆ ಬೇಯಿಸಿ ಕೊಳ್ಳಲು ಯತ್ನಿಸಿದ ಕೆಲವರನ್ನು ಬಿಟ್ಟು).ಅವರೆಲ್ಲರೂ ಈ ಸಮಯದಲ್ಲೂ ಕೊಡಗಿನ ಪುನಾರಚನೆಗೆ, ಪುನರ್ವಸತಿಗಾಗಿ ಯೋಚಿಸುತಿದ್ದಾರೆ. ಇದರ ಮದ್ಯೆ ನನಗೆ  ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಗಮನ ಸೆಳೆಯಿತು, ಒಬ್ಬ ಯುವಕ ಕೊಡಗಿನ ಪರಿಸ್ಥಿತಿಯ ಬಗ್ಗೆ  ಮಾತನಡುತಿದ್ದ, ಜಾತಿ  ವ್ಯವಸ್ಥೆಯ ಮೇಲೆ ಕೆಂಡ ಕಾರುತಿದ್ದ. ಒಳ್ಳೆಯದೇ, ಆದರೇ ತನ್ನ ಸಿಟ್ಟು ಹೊರಗೆ ಹಾಕುವ ಸಮಯ ಇದಲ್ಲ ಎಂಬುದು ನನ್ನ ಅನಿಸಿಕೆ.. ಪರಿಸ್ಥಿತಿ ಹೀಗಿರುವಾಗ ನೋಂದವರಿಗೆ ಸಾಂತ್ವಾನ ಹೇಳುವ ಅಪಾಯದಲ್ಲಿರುವವರಿಗೆ     ದೈರ್ಯ ತುಂಬುವ ಕೆಲಸಗಳಾಗಬೇಕು ನಮ್ಮ ಕೈಲಾದ ಸಹಾಯ ಮಾಡುವ ಅಥವಾ ಉಪಯುಕ್ತ ಮಾಹಿತಿಗಳ್ಳನ್ನು ಬೇಕಾದವರಿಗೆ ತಲುಪಿಸುವ ಕೆಲಸ ಮಾಡಬೇಕು. ಕಷ್ಟದಲ್ಲಿ ಇದ್ದವರನ್ನು ಕಾಪಾಡುವ ಪ್ರಯತ್ನ ಬಿಟ್ಟು ಹೀಗೆ ಅಸಮಂಜಸವಾಗಿ ಇಂಥಹ ಸಮಯದಲ್ಲಿ ಮಾತನಾಡುವುದು  ಸರಿಯಲ್ಲವೆಂದು ನನ್ನ ಅಭಿಪ್ರಾಯ  ತಪ್ಪಿದ್ದರೆ ತಿಳಿಸಿ ಕಲಿಯಲು ನಾನು ಸದಾ ಸಿದ್ದ.
ನಿಮ್ಮ  ಬೋಪಯ್ಯ.

No comments:

Post a Comment